ಓದಿ ಓಡಿದವರು!

Thursday 2 February 2012

ಆತಂಕವಾದಿ


(ಮುನ್ನುಡಿ: ಈ ಪುಟ್ಕತೆ ಕಾಲ್ಪನಿಕವಲ್ಲ, ಮೊನ್ನೆ (೧೭-೦೧-೨೦೧೨) ನಡೆದ ಎರಡು ಸತ್ಯ ಘಟನೆಗಳನ್ನು ಆಧಾರಿಸಿ ಕಥೆಯ ರೂಪ ತಳೆದಿದ)

“Public ಅನಾಹುತ ಎದುರಿಸಬೇಕಾಗುತ್ತೆ. ಈಗಲೇ ಹೇಳ್ತಿದೀನಿ ಏನೇ ತೊಂದರೆ ಆದ್ರೂ ನಾವು ಜವಾಬ್ದಾರನಲ್ಲ” ಎದುರಿಗೇ ನಿಂತು AK47 ನಿಂದ ಗುಂಡಿನ ಸುರಿಮಳೆಗಯ್ದಹಾಗಿತ್ತು ಆ ಮಾತುಗಳು. ಕೆಲವು ನಿಮಿಷ ಸ್ತಬ್ಧವಾಗಿದ್ದೆ. ಒಂದು ಕ್ಷಣದಲ್ಲಿ “ಸೋಲು ಒಪ್ಪಿಕೊಳ್ಳೋದೇ ಆದರೆ ಸೈನ್ಯ ಹಿಂದಿರುಗುವಾಗ ಸಾಮಾನ್ಯ ಪ್ರಜೆಗಳನ್ನೂ ಒಳಗೊಂಡಂತೆ ಇಡೀ ಬರ್ಲಿನ್ ನಗರವನ್ನ ಧ್ವಂಸ ಮಾಡುತ್ತಾ ಯಾರನ್ನೂ ಉಳಿಸದೆ ಶತ್ರುಗಳಿಗೆ ನಿರ್ಜೀವ ನಗರವನ್ನ ಒಪ್ಪಿಸೋಣ, Show no mercy to anyone, ಸೋತವರಿಗೆ ಬದುಕುವ ಹಕ್ಕಿಲ್ಲ” ಎಂದು ಆಜ್ಞೆ ಹೊರಡಿಸಿದ್ದ ಹಿಟ್ಲರ್ ಮನಃಪಟಲದಲ್ಲಿ ಹಾದು ಹೋದ. ಮತ್ತೊಮ್ಮೆ ನನಗೇ ನೇರವಾಗಿ ಬೆದರಿಕೆ ಹಾಕುತಿದ್ದ ಮನುಷ್ಯನೆಡೆಗೆ ದಿಟ್ಟಿಸಿದೆ ‘ಹಿಟ್ಲರ್’ ಆತನಲ್ಲೀ ಹಿಟ್ಲರನೇ ಕಾಣಿಸುತ್ತಿದ್ದ ಹಿಟ್ಲರ್ ಸತ್ತಿಲ್ಲ ಇಲ್ಲೇ ಇದ್ದಾನೆ!!!! ಅಷ್ಟರಲ್ಲಿ ನನ್ನ ಪ್ರತಿನಿಧಿ ಎನಿಸಿಕೊಂಡ ಆ ವ್ಯಕ್ತಿ ಮಾತು ಮುಂದುವರೆಸಿದ. ಆತನ ಮುಂದೆ ಹಲವರು mike, cameraಗಳನ್ನು ಹಿಡಿದು ಸೆರೆಹಿಡಿಯುತ್ತಿದ್ದರು ಎಂದು ತನ್ನನ್ನು ತಾನು hero ಎಂದುಕೊಂಡಿದ್ದನೋ ಏನೋ ಗೊತ್ತಿಲ್ಲ ಆದರೆ ಅವರೆಲ್ಲರ ಹಿಂದೆ ನಿಂತಿದ್ದ ನನ್ನನ್ನು ನೇರವಾಗಿ ದಿಟ್ಟಿಸುತ್ತಾ ಕೈತೋರಿಸುತ್ತಲೇ ಮಾತು ಮುಂದುವರೆಸಿದ. ಇನ್ನು ನಾಲ್ಕು ದಿನಗಳಲ್ಲಿ ಸರ್ಕಾರ ನಮ್ಮ ಮನವಿಗಳನ್ನ ಪರಿಗಣಿಸದೇ ಇದ್ದರೆ ಈಗ ನಡೆಯುತ್ತಿರುವ ಅಡುಗೆ ಇಂಧನದ ಮುಷ್ಕರದ ಜೊತೆಗೆ, petroleum ಸಾಗಣೆಯ strike ಕೂಡ ಹೂಡಬೇಕಾಗುತ್ತದೆ. ಇದರಿಂದ ಭಾರಿ ಹಾನಿ ಉಂಟಾಗುತ್ತದೆ. ಏನೇ ಅವಘಡಗಳಾದ್ರೂ ನಾವು ಜವಾಬ್ದಾರರಲ್ಲ. ಆತ ನನ್ನನ್ನೇ ನೇರವಾಗಿ ನೋಡುತ್ತಾ ನನಗೆ ಬೆದರಿಕೆ ಒಡ್ಡುತ್ತಿದ್ದ ಅರೆರೆ ಇವನ್ಯಾರು ಆತಂಕವಾದಿಯಾಗಿ ಘಂಟಾಘೋಷವಾಗಿ ಎಲ್ಲರ ಮುಂದೆ ಬೆದರಿಕೆ ಹಾಕುತ್ತಿದ್ದರೂ ಸಹಿತ ನನ್ನ ಮುಂದಿದ್ದವರೆಲ್ಲರೂ ಅವನ ಮಾತುಗಳನ್ನ ಸೆರೆಹಿಡಿಯುವುದರಲ್ಲಿ busy ಅಗಿದ್ದಾರೆ. ಅಲ್ಲ ಇಂದು ಕೇವಲ ನನ್ನ ಮೂರು ಘಂಟೆಗಳ ಓಡಾಟಕ್ಕೆ ತೊಂದರೆ ಮಾಡಿದ ವಕೀಲರನ್ನೇ ಬಿಡದೆ ಅವರ ವಿರುದ್ಧ ಮುಷ್ಕರ ಹೂಡಿ ಇದೇ mike, camera ಹಿಡಿದವರ ಮುಂದೆ ವಕೀಲರ ದುಶ್ಕೃತ್ಯವನ್ನ ಎತ್ತಿ ಹಿಡಿದ ನನ್ನಂತ ನನಗೇ ಹೀಗೆ ಬೆದರಿಕೆ ಹಾಕುತ್ತಿದ್ದಾನಲ್ಲ. ಯಾರೋ ಮೂರು ವಕೀಲರು ಮಾಡಿದ ತಪ್ಪಿಗೆ, ಇನ್ಯಾರೋ ಕನಿಷ್ಟ ಬಿಲ್ಲೆಗಳು ಪ್ರತಿತಪ್ಪು ಮಾಡಿ ಅವರವರಲ್ಲಿ ನ್ಯಾಯ ತೀರ್ಮಾನ ಮಾಡಿಕೋಳ್ಳೋದನ್ನು ಬಿಟ್ಟು ಗುಲ್ಲೆಬ್ಬಿಸಿ, ಸಮಸ್ಯೆಯನ್ನು ಬೇಕಂತಲೇ ದೊಡ್ಡದು ಮಾಡಿ, ಒಗ್ಗಟ್ಟಿನ ಪ್ರದರ್ಶನದ ಹೆಸರಿನಲ್ಲಿ ಮುಷ್ಕರ ಹೂಡಿ ಯಾವುದೇ ರೀತಿ, ಭಾಗಿಯಾಗದ ನನಗೂ ತೊಂದರೆ ಮಾಡುತ್ತಿರುವಾಗ ನಾನ್ಯಾತಕ್ಕಾಗಿ ಸುಮ್ಮನಿರಲಿ ಅದಕ್ಕಾಗಿಯೇ ಧ್ವನಿ ಎತ್ತಿದ್ದೆ. ಅದೊಂದು ಆರು ಘಂಟೆಗಳ ಕಾಲ ಬಂದೊದಗಿದ ಚಿಕ್ಕ ತೊಂದರೆ ಅಷ್ಟೇ. ಇನ್ನು ಈ ಆತಂಕವಾದಿ ವ್ಯಕ್ತಿ ತಂದೊಡ್ಡುತ್ತಿರುವ ಸಮಸ್ಯೆ ಎಷ್ಟು ದಿನಗಳವರೆಗೆ ನನ್ನನ್ನು ಭಾದಿಸುವುದೋ ಗೊತ್ತಿಲ್ಲ. ಇನ್ನ ಇವನನ್ನ ಹೇಗೆ, ಮತ್ತು ಎಷ್ಟರ ಮಟ್ಟಿಗ್ ತರಾಟೆಗೆ ತೆಗೆದುಕೊಳ್ಳಲಿ. ಆ ವಕೀಲರಿಗೆ ಬುದ್ದಿ ಕಲಿಸಿದ್ದು ಸಾಲದು. ಇಂಥ ಆತಂಕವಾದಿಗೆ ಇನ್ನೂ ಹೆಚ್ಚಿನ ಪಾಠವನ್ನೇ ಕಲಿಸಬೇಕು. ಆತಂಕವಾದಿಗೆ ಪ್ರತಿ ಆತಂಕವಾದವೊಂದೇ ಮಾರ್ಗ. ಏಟಿಗೆ ಎದಿರೇಟು. ನನ್ನಲ್ಲಿರುವ ಆತಂಕವಾದಿ ಜಾಗೃತನಾದ. ಸರ್ಕಾರ ಮತ್ತು ಅನಿಲ ಕಂಪೆನಿಗಳ ಮಧ್ಯೆ ನೂರು ಸಮಸ್ಯೆಗಳಿರಲಿ ಅದನ್ನ ಅವರವು ಮಾತನಾಡಿ, ಚರ್ಚಿಸಿ ಬಗೆಹರಿಸಲಿ, ಆ ಸಮಸ್ಯೆಯ ನಿವಾರಣೆಗೆಂದೇ ಅವರು ಕುರ್ಚಿಯ ಮೇಲಿರೋದು, ಅದು ಬಿಟ್ಟು ನನ್ನಂತ ನನ್ನನ್ನ ಅಸ್ತ್ರವಾಗಿ ಬಳಸಿ ತಮ್ಮ ಕಾರ್ಯ ಸಾಧಿಸಲು ಹೊಂಚು ಹಾಕಿದರೆ ನಾನು ಸುಮ್ಮನಿರುವವನಲ್ಲ ಅಂತ ಇಂದು ಇವರುಗಳಿಗೆ ತೋರಿಸಿಕೊಡುತ್ತೇನೆ. ಇದಕ್ಕೆ ಒಂದೇ ದಾರಿ ಆ ಆತಂಕವಾದಿಯನ್ನೇ ಮುಗಿಸುವುದು. ಹೌದು. ಇದೇ ಸರಿ. ನಾನು ನನ್ನ ಕೈಲಿದ್ದ AK47 ಅವನಿಗೇ ಗುರಿಯಿಟ್ಟು ಕಣ್ಮುಚ್ಚಿ Trigger ಒತ್ತಿದೆ, ಒತ್ತಿದೆ, ಒತ್ತಿದೆ..................

ಮನಸ್ಸಿನಲ್ಲಿರುವ ಕ್ರೋಧ ಶಮನವಾಗುವವರೆಗೂ ಒತ್ತಿದೆ. TV channelಗಳು ಅಡ್ಡಾದಿಡ್ಡಿ change ಆಗೋಗಿತ್ತು. ಕೈಲಿದ್ದ TV Remote ಕೆಳಗಿಟ್ಟು, ಊಟದ ಕತೆ ಮುಗಿಸಿದೆ.      
                     – ಜೈ ಹಿಂದ್

(ಹಿನ್ನುಡಿ: ಈ ಕತೆಯಲ್ಲಿ ಬರುವ ನಾನು ಸ್ವಯಂ ನಾನಲ್ಲ, ಮತ್ಯಾರೆಂಬ ಪ್ರಶ್ನೆಗೆ ಉತ್ತರ ಸ್ವಯಂ ನೀವೇ!!!!!!)

1 comment:

  1. ಸಟೈರ್ ಚೆನ್ನಾಗಿದೆ, ಈಗಿನ ಡಿಜಿಟಲ್ ಯುಗದಲ್ಲಿ ಎಲ್ಲರು ಗುಂಡು ಹಾರಿಸೋರೆ, ಗುರಿಯಾಗೋಕೇ ಜನರಿಲ್ಲ.

    ReplyDelete